ಸುದ್ದಿ

ಜೈಲಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ!: ಫೋಟೋ ವೈರಲ್ ಬೆನ್ನಲ್ಲೆ ತನಿಖೆಗೆ ಕಾರಾಗೃಹ ಡಿಜಿ ಆದೇಶ

Share It

ಬೆಂಗಳೂರು:ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಜೈಲಿನಲ್ಲಿ ರೌಡಿಗಳ ಜೊತೆ ಕಾಫಿ ಗ್ಲಾಸ್ ಹಿಡಿದು, ಸಿಗರೇಟ್ ಸೇದುತ್ತಾ ಐಷರಾಮಿಯಾಗಿ ಕುಳಿತಿರುವ ಫೋಟೋ ವೈರಲ್ ಆಗಿದ್ದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಈ ಫೋಟೋ ಬಹಿರಂಗವಾಗುತ್ತಿದ್ದಂತೆ ಕಾರಾಗೃಹ ಡಿಜಿ ಮಾಲಿನಿ ಕೃಷ್ಣಮೂರ್ತಿ ಅವರು ಆಂತರಿಕ ತನಿಖೆಗೆ ಆದೇಶಿಸಿದ್ದಾರೆ. ಡಿಜಿ ಆದೇಶವಾಗುತ್ತಿದ್ದಂತೆ ಜೈಲಿಗೆ ಭೇಟಿ ನೀಡಿರುವ ಅಧಿಕಾರಿಗಳು ವಿಚಾರಣೆ ಕೈಗೊಂಡಿದ್ದು, ಜೈಲಿನಲ್ಲಿರುವ ಸಿಸಿ ಕ್ಯಾಮರಾಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

ಇತ್ತ ಜೈಲಿನಲ್ಲಿ ರೌಡಿಗಳ ಜೊತೆ ನಟ ದರ್ಶನ್ ಐಷರಾಮಿಯಾಗಿ ಕುಳಿತು ಹರಟುತ್ತಿರುವ ಫೋಟೋ ವೈರಲ್ ಆಗಿರುವುದು ಸಾರ್ವಜನಿಕರಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇನ್ನೊಂದೆಡೆ ದರ್ಶನ್ ಐಷರಾಮಿಯಾಗಿ ಕುಳಿತಿರುವ ಫೋಟೋ ಮಾದ್ಯಮಗಳಲ್ಲಿ ಪ್ರಸಾರವಾಗಿರುವುದನ್ನು ನೋಡಿರುವ ರೇಣುಕಾ ಸ್ವಾಮಿ ಕುಟುಂಬ ತನ್ನ ಮಗನ ಸಾವಿಗೆ ನ್ಯಾಯ ಸಿಗುವ ಕುರಿತು ನೋವು ಹೊರಹಾಕಿದ್ದು. ಹತ್ಯೆಯ ಆರೋಪಿಗಳಾದ ದರ್ಶನ್ ಅಂಡ್ ಗ್ಯಾಂಗ್ ಗೆ ಶಿಕ್ಷೆಯಾಗಬೇಕು, ಆಗ ಮಾತ್ರ ನನ್ನ ಮಗನ ಆತ್ಮಕ್ಕೆ ಶಾಂತಿಸಿಗಲು ಸಾಧ್ಯ ಎಂದು ಮತ್ತೊಮ್ಮೆ ನೋವು ತೋಡಿಕೊಂಡಿದ್ದಾರೆ.


Share It

You cannot copy content of this page